Monday, August 25, 2025

ಭಾರತದಲ್ಲಿ ಚುನಾವಣೆಗಳು ನ್ಯಾಯೋಚಿತವಾಗಿವೆಯೇ?

ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ಮಹದೇವಪುರ ಕ್ಷೇತ್ರದ ಚುನಾವಣಾ ಪ್ರಕ್ರಿಯೆಯು ಪಾರದರ್ಶಕವಾಗಿರಲಿಲ್ಲ ಎನ್ನುವ ವಿಚಾರವನ್ನು ಮುಖ್ಯವಾಗಿ ಮುಂದಿಟ್ಟುಕೊಂಡು ಕೆಲದಿನಗಳ ಹಿಂದೆ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ನಡೆಸಿದ ಪತ್ರಿಕಾಗೋಷ್ಟಿ ಮತ್ತು ನಂತರದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನಡೆಸಿದ ಪತ್ರಿಕಾ ಗೋಷ್ಟಿ ಗಮನಿಸಲೇಬೇಕಾದ ವಿದ್ಯಮಾನಗಳು. 

ಮತದಾರರ ಪಟ್ಟಿಯಲ್ಲಿನ ದೋಷಗಳು ಮತ್ತು ಆ ಮೂಲಕ ಚುನಾವಣೆಯ ಫಲಿತಾಂಶದ ತಿರುಚುವಿಕೆಯ ಸಾಧ್ಯತೆ  ಇವು  ಕೆಲವು ಅಂಕಿ ಸಂಖ್ಯೆ ಮತ್ತು ಪುರಾವೆಗಳೊಂದಿಗೆ ರಾಹುಲ್ ಗಾಂಧಿ ಮಾಡಿದ ಮುಖ್ಯ ಆರೋಪ. ಪ್ರಜಾಪ್ರಭುತ್ವದ ಅಸ್ತಿತ್ವವೇ ಪಾರದರ್ಶಕ ಮತದಾನದ ಬುನಾದಿಯ ಮೇಲೆ ನಿಂತಿರುವುದರಿಂದ ಇದು ಅತ್ಯಂತ ಗಂಭೀರ ವಿಚಾರ. ಚುನಾಣಾ ಪ್ರಕ್ರಿಯೆಯು ನ್ಯಾಯೋಚಿತವಾಗಿರುವನ್ನು ಖಚಿತಪಡಿಸುವುದಕ್ಕಾಗಿಯೇ ನಿಯೋಜನೆಯಾಗಿರುವ ಚುನಾವಣಾ ಆಯೋಗದ ಪ್ರತಿಕ್ರಿಯೆ ಬೇಜವಾಬ್ದಾರಿಯದಾಗಿತ್ತೆಂದೇ ಹೇಳಬಹುದು. ಇದು ಆಯೋಗದ ಪಾರದರ್ಶತೆಯ ಬಗ್ಗೆ ಖಂಡಿತವಾಗಿಯೂ ಅನುಮಾನಗಳನ್ನು ಹುಟ್ಟಿಸುತ್ತದೆ. 

ಈ ಬಗ್ಗೆ ಮಾಧ್ಯಮಗಳಲ್ಲೂ ಲೇಖನಗಳು ಬರುತ್ತಿವೆ. ದಿ ಎಕನಾಮಿಸ್ಟ್ ಪತ್ರಿಕೆಯಲ್ಲಿ 'ಭಾರತದಲ್ಲಿ ಚುನಾವಣೆಗಳು ನ್ಯಾಯೋಚಿತವಾಗಿವೆಯೇ?' ಎಂಬ ಲೇಖನವು ಚುನಾವಣಾ ಆಯುಕ್ತರ ಆಯ್ಕೆಯಲ್ಲಿ ಆಡಳಿತ ಪಕ್ಷಕ್ಕಿರುವ ಹೆಚ್ಚುವರಿ ಅಧಿಕಾರ, ಚುನಾವಣೆಗಳ ಸಂದರ್ಭದಲ್ಲಿ ಮಾದರಿ ಆಚಾರ ಸಂಹಿತೆಯ ವಿಚಾರದಲ್ಲಿ ಆಡಳಿತ ಪಕ್ಷವಾದ ಬಿಜೆಪಿಯ ಬಗ್ಗೆ ಆಯೋಗವು ತಳೆಯುವ ಮೃದು  ಧೋರಣೆ ಇತ್ಯಾದಿಗಳ ಉಲ್ಲೇಖವಿದೆ. ಹಾಗೆಯೇ 'ಕಾಂಗ್ರೆಸ್ ಪಕ್ಷವು ಮತದಾರ ಪಟ್ಟಿಯ ಎತ್ತಿರುವ ಆರೋಪಗಳು ಭಾರತದಲ್ಲಿ ಪ್ರಜಾಪ್ರಭುತ್ವ ರಕ್ಷಣೆಗಾಗಿ  ನಡೆಸುವ ಸಮರವೇ ಆಗಬಹುದು' ಎಂಬ ಲೇಖನ ಸ್ಕ್ರೋಲ್.ಇನ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.  


No comments :